ಧ್ಯೇಯೋದ್ದೇಶ


ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ “ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ”ವನ್ನು ಸ್ಥಾಪಿಸಿದೆ.
 
೧. ಈ ಸಂಶೋಧನಾ ಕೇಂದ್ರವು ಭಾಷೆಯ ಸಂಶೋಧನೆ, ದಾಖಲೀಕರಣ, ಪ್ರಚಾರ ಮತ್ತು ಭೋಧನೆಗಳಿಗೆ ಸಂಬಂಧಪಟ್ಟಂತೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಗುರುತಿಸುವ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಕರ‍್ಯಗತಗೊಳಿಸುತ್ತದೆ. ಜೊತೆಗೆ ಈ ಕೇಂದ್ರವು ಇತರ ವ್ಯಕ್ತಿಗಳು, ಸಂಸ್ಥೆಗಳು, ಭಾರತದ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿದೇಶಗಳಲ್ಲಿ ನಡೆಯುವ ಅನ್ಯ ಶಾಸ್ತ್ರೀಯಭಾಷೆಗಳ ಅಧ್ಯಯನಕ್ಕೆ ಸಂರ‍್ಕವನ್ನು ಕಲ್ಪಿಸುತ್ತದೆ. ಈ ಸಂಶೋಧನಾ ಕೇಂದ್ರದ ಕರ‍್ಯಚಟುವಟಿಕೆಗಳು ಹೀಗಿವೆ:
 
- ಶಾಸ್ತ್ರೀಯಭಾಷೆಯ ಆಕರಗಳನ್ನು ಗುರುತಿಸುವುದು.
- ಶಾಸ್ತ್ರೀಯಭಾಷೆಯನ್ನು ಅದರ ಆಡುವ ಭೂವ್ಯಾಪ್ತಿಯ ಒಳಗೆ ಮತ್ತು ಹೊರಗೆ ಉತ್ತೇಜಿಸುವುದು, ಪ್ರಚಾರ ಮಾಡುವುದು ಮತ್ತು ಸಂರಕ್ಷಿಸುವುದು.
- ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಂಶೋಧನೆ ಮತ್ತು ದಾಖಲೀಕರಣವನ್ನು ಕೈಗೊಳ್ಳುವುದು ಮತ್ತು ಪ್ರೋತ್ಸಾಹಿಸುವುದು. - ಹಸ್ತಪ್ರತಿಗಳನ್ನು ಸಂಗ್ರಹಿಸುವುದು ಮತ್ತು ಗಣಕೀಕರಿಸುವುದು.
- ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುವುದು.
- ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬರಹ ಸಂಪತ್ತಿನಿಂದ ಗಣ್ಯಸ್ಧಾನವನ್ನು ಪಡೆದ ವಿದ್ವಾಂಸರಿಗೆ ಗೌರವ ಪ್ರಶಸ್ತಿ ಪ್ರಮಾಣಪತ್ರ, ನಗದು ಪ್ರಶಸ್ತಿಗಳನ್ನು ಕೊಡುವುದರ ಮೂಲಕ ಸನ್ಮಾನಿಸುವುದು.
- ಶಾಸ್ತ್ರೀಯಪಠ್ಯಗಳ ಬಗ್ಗೆ ಅರಿವನ್ನು ಪಡೆದಿರುವ ವಿದ್ವಾಂಸರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸುವುದು.
- ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ಪುರಾತತ್ವಶಾಸ್ತ್ರ ಮತ್ತು ಪ್ರಾಚೀನ ಇತಿಹಾಸ ಮುಂತಾದವುಗಳ ಅಂತರ ಶಿಸ್ತೀಯ ಸಂಶೋಧನೆಗೆ ಮರ‍್ಗಗಳನ್ನು ರೂಪಿಸುವುದು.
- ಶಾಸ್ತ್ರೀಯಭಾಷೆ, ಶಾಸ್ತ್ರೀಯಸಂಗೀತ ಮತ್ತು ಶಾಸ್ತ್ರೀಯನೃತ್ಯಗಳ ನಡುವಣ ಸಂರ‍್ಕಗಳನ್ನು ಪರಿಶೋಧಿಸುವುದು.
- ಶಾಸ್ತ್ರೀಯಭಾಷೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಸಂರ‍್ಕಿಸುವುದು.
- ಶಾಸ್ತ್ರೀಯಪಠ್ಯಗಳನ್ನು ಇತರ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಶ್ ಹಾಗೂ ಆಯ್ದ ಯೂರೋಪಿಯನ್ ಭಾಷೆಗಳಿಗೆ ಭಾಷಾಂತರಿಸುವುದು.
- ಜಗತ್ತಿನ ಪುರಾತನ ನಾಗರಿಕತೆಗಳನ್ನು ಶಾಸ್ತ್ರೀಯಭಾಷೆಯ ಸಾಂಸ್ಕೃತಿಕ ಕಣಜಕ್ಕೆ ಅರಿವಧ್ಯಯನದ ಅನುಸಂಧಾನವನ್ನು ಉತ್ತೇಜಿಸುವುದು.
- ಪುರಾತನ ದ್ರಾವಿಡ ಕಾಲದ ಭಾರತದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡಲು ಬೇಕಾಗುವ ಜ್ಞಾನಭಂಡಾರವನ್ನು ಸ್ಧಾಪಿಸುವುದು.
- ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯಭಾಷೆಯ ಅಧ್ಯಯನ ಪೀಠಗಳನ್ನು ಪ್ರತಿಷ್ಠಾಪಿಸುವುದು.
- ಶಾಸ್ತ್ರೀಯಭಾಷೆಯ ಅಧ್ಯಯನಕ್ಕೆ ನೆರವು ನೀಡುವ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
- ಮಾಹಿತಿ ಪ್ರಸಾರ ಮತ್ತು ಸಂರ‍್ಕದ ಮೂಲಕ ಭಾರತದ ಶಾಸ್ತ್ರೀಯಭಾಷೆಗಳ ಬಗೆಗಿನ ಕರ‍್ಯವನ್ನು ಸಂಯೋಜಿಸುವುದು.
 
೨. ಈ ಕೇಂದ್ರವು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಕೆಳಕಂಡ ಪ್ರಶಸ್ತಿಗಳನ್ನು ಸ್ಥಾಪಿಸುತ್ತದೆ. - ಒಬ್ಬ ಭಾರತೀಯ ವಿದ್ವಾಂಸರಿಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿ, ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ (ಶಾಲು) ಮತ್ತು ಐದು ಲಕ್ಷ ರೂಪಾಯಿ ನಗದು ಬಹುಮಾನ.
- ಇಬ್ಬರು ವಿದ್ವಾಂಸರಿಗೆ ಜೀವಮಾನದ ಸಾಧನೆಗಾಗಿ ಅಂತರ ರಾಷ್ಟ್ರೀಯ ಪ್ರಶಸ್ತಿಗಳು (ಒಬ್ಬರು ಭಾರತ ಸಂಜಾತರು, ಇನ್ನೊಬ್ಬರು ಭಾರತ ಸಂಜಾತರಲ್ಲದವರು) ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ (ಶಾಲು) ಮತ್ತು ಐದು ಲಕ್ಷ ರೂಪಾಯಿ ನಗದು ಬಹುಮಾನ.
- ಐದು ಜನ ಯುವ ವಿದ್ವಾಂಸರಿಗೆ (೩೦ ರಿಂದ ೪೦ ವಯೋಮಿತಿಯಲ್ಲಿ ಇರುವವರು) ಗೌರವ ಪ್ರಮಾಣಪತ್ರ, ನೆನಪಿನ ಕಾಣಿಕೆ (ಶಾಲು) ಮತ್ತು ಒಂದು ಲಕ್ಷ ರೂಪಾಯಿ ನಗದು ಬಹುಮಾನ.
 
೩. ಯೋಜನಾ ನರ‍್ದೇಶಕರು ಈ ಕೇಂದ್ರದ ಮುಖ್ಯಸ್ಧರು, ಇವರೊಂದಿಗೆ ೬ ಜನ ಸಹಾಯಕ ಸಿಬ್ಬಂದಿ, ೧೫ ಜನ ಸಂಶೋಧಕರು ಹಾಗೂ ೧೫ ಜನ ಹಿರಿಯ ಸಂಶೋಧಕರು ಕರ‍್ಯನರ‍್ವಹಿಸುತ್ತಾರೆ. ಈ ಯೋಜನಾ ನರ‍್ದೇಶಕರು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನರ‍್ದೇಶಕರ ಮೇಲ್ವಿಚಾರಣೆ ಮತ್ತು ಮರ‍್ಗರ‍್ಶನ ಹಾಗೂ ರಾಜ್ಯ ರ‍್ಕಾರದ ಸಂಬಂಧಪಟ್ಟ ಇಲಾಖೆಗಳ ಸಲಹೆ ಮತ್ತು ಸಮನ್ವಯದೊಂದಿಗೆ ಶಾಸ್ತ್ರೀಯ ಕನ್ನಡದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನರ‍್ದೇಶಕರು, ಐದು ಜನ ಪ್ರಖ್ಯಾತ ವಿದ್ವಾಂಸರು ಇರುವ ಯೋಜನಾ ಮೇಲ್ವಿಚಾರಣಾ ಮಂಡಲಿಯನ್ನು ರಚಿಸುತ್ತಾರೆ. ಮಾನವ ಸಂಪನ್ಮೂಲ ಸಚಿವಾಲಯದ ನರ‍್ದೇಶಕರು(ಹಣಕಾಸು), ನರ‍್ದೇಶಕರು (ಭಾಷೆಗಳು), ಮತ್ತು ಕೇಂದ್ರ ಸಾಹಿತ್ಯ ಅಕಾಡಮಿಯ ಕರ‍್ಯರ‍್ಶಿಗಳು ಈ ಮಂಡಲಿಯ ಪದನಿಮಿತ್ತ ಸದಸ್ಯರಾಗಿದ್ದು, ಯೋಜನಾ ನರ‍್ದೇಶಕರು ಸದಸ್ಯ ಸಂಚಾಲಕರಾಗಿರುತ್ತಾರೆ.